Sunday, June 28, 2020

MANDARA DAMAGE HOUSES 24-6-20

ಮಹಾಕವಿಮನೆ ಪುನರ್‌ ನಿರ್ಮಾಣವಾಗಲಿ: ಭಟ್ಟಾರಕ ಶ್ರೀ ಆಗ್ರಹ
ಮೂಡುಬಿದಿರೆ: ತುಳು ಹಾಗೂ ಕನ್ನಡ ಭಾಷೆಗೆ ಅನರ್ಘ್ಯ ಕೊಡುಗೆ ನೀಡಿದ ದಿವಂಗತ ವಿದ್ವಾನ್‌ ಮಂದಾರ ಕೇಶವ ಭಟ್ಟರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯಬಾರದ ದುರ್ಗಟನೆ ನಡೆದಿದೆ. ಮಂದಾರರು ಹುಟ್ಟಿಬೆಳೆದ ಮನೆಗೂ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ಊಹಿಸಲೂ ಅಸಾಧ್ಯವಾದ ಘನಘೋರ ದುರಂತ ನಡೆದಿದ್ದು ಇದು ಮಂದಾರರ ಮನೆಮಂದಿಗೆ, ಅವರ ಅಭಿಮಾನಿಗಳಿಗೆ, ಸಮಸ್ತ ಸಮಾಜಕ್ಕೆ ತೀವ್ರ ನೋವುಂಟುಮಾಡಿದೆ. ಆಡಳಿತ ವರ್ಗದ ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದಾದ ದುರಂತದಲ್ಲಿ ಮಂದಾರರು ಹುಟ್ಟಿಬೆಳೆದ ಮನೆ, ದೈವಸ್ಥಾನ, ನಾಗಬನ ಸೇರಿದಂತೆ ಇಡೀ ಪ್ರದೇಶದ ಸುಮಾರು ೧೨ಎಕ್ಕರೆಗೂ ಅಧಿಕ ಕೃಷಿಭೂಮಿ, ೨೭ ಮನೆಗಳು ಸಂಪೂರ್ಣ ನಾಶವಾಗಿದ್ದು ಇವರುಗಳಿಗೆ ಬದುಕು ಕಟ್ಟುವ ಕಾರ್ಯ ತಕ್ಷಣ ಆಗಬೇಕಾಗಿದೆ. ಶತಮಾನೋತ್ಸವದ ವಿಜೃಂಭಣೆಯ ಆಚರಣೆಯನ್ನು ಮಾಡಬೇಕಾಗಿದ್ದ ಸಂದರ್ಭದಲ್ಲಿ ಮಂದಾರರ ಮನೆಗೆ ಈ ಸ್ಥಿತಿ ಬಂದೊದಗಿದ್ದು ಶೋಚನೀಯವಾದುದು. ಈ ಐತಿಹಾಸಿಕ ಪಾರಂಪರಿಕ ಮನೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿ ಸಮಸ್ತ ಸಮಾಜದ್ದಾಗಿದೆ. ಕವಿ ಮನೆಯ ವಾಸ್ತು ವೈಭವ, ಧಾರ್ಮಿಕ ನಂಬಿಕೆಗಳ ಪುನರ್‌ ನಿರ್ಮಾಣದ ಕಾರ್ಯ ನಡೆದು ಮಹಾಕವಿ ಮಂದಾರರ ಪಾರಂಪರಿಕ ಗೃಹ ಸಂರಕ್ಷಣೆ ಮತ್ತು ಮರು ನಿರ್ಮಾಣಕ್ಕೆ ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಹಾಗೂ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಸರಕಾರಕ್ಕೆ ಒತ್ತಾಯಿಸೇಕಾಗಿದೆ. ಹಾಗೂ ಶೀಘ್ರ ಪುನರ್‌ ನಿರ್ಮಾಣ ಕಾರ್ಯ ಹಾಗೂ ಅಲ್ಲಿದ್ದ ಅಷ್ಟೂ ಕುಟುಂಬಗಳ ಬದುಕು ಕಟ್ಟುವ ಕಾರ್ಯ ನಡೆಯಬೇಕಾಗಿದೆ ಎಂದು ಮೂಡುಬಿದಿರೆ ಜೈನಮಠದ ಭಾರತಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯಮಹಾ ಸ್ವಾಮಿಗಳು ಆಗ್ರಹಿಸಿದ್ದಾರೆ. ಜೈನಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ವಾರದ ಹಿಂದೆ ಸ್ವತಃ ಸ್ಥಳಭೇಟಿ ನಡೆಸಿ ಸಂಪೂರ್ಣ ಚಿತ್ರಣವನ್ನು ನೋಡಿದ್ದು ಮಾತ್ರವಲ್ಲದೆ, ಮಂದಾರ ನಿವಾಸಿಗಳ ಅಳಲು ಕೇಳಿರುವುದಾಗಿ ಶ್ರೀಗಳು ತಿಳಿಸಿದರು. ಶಾಸಕರು, ಸಂಸದರು, ಹಾಗೂ ಜಿಲ್ಲಾಡಳಿತ ತಕ್ಷಣ ಈ ಬಗ್ಗೆ ಸೂಕ್ತ ನಿರ್ಧಾರವನ್ನು ತಕ್ಷಣ ಕೈಗೊಳ್ಳಬೇಕು. ಈ ದುರಂತಕ್ಕೆ ವರುಷ ತುಂಬುವ ಹೊತ್ತು ಸನ್ನಿಹಿತವಾದರೂ ಸೂಕ್ತ ನ್ಯಾಯ ದೊರಕದಿರುವುದು ವಿಪರ್ಯಾಸವೇ ಸರಿ ಎಂದರು.
ತುಳುನಾಡಿನ ಪುರಾತನ ವಾಸ್ತು ವೈಭವ ಹೊಂದಿರುವ ಕೆಂಪುಬಣ್ಣದ ವಿಶಾಲ ಪಡಸಾಲೆಯ ಕವಿ ಮನೆಯನ್ನು ಮಂದಾರ ಕುಟುಂಬಸ್ಥರು ಅತ್ಯಂತ ಶ್ರದ್ದೆಯಿಂದ ಆಧುನಿಕತೆಯ ಸ್ಪರ್ಶವೇ ಇಲ್ಲದಂತೆ ಪರಂಪರಾಗತ ಶೈಲಿಯನ್ನು ಉಳಿಸಿಕೊಂಡು ಕಾಪಾಡಿಕೊಂಡು ಬಂದಿದ್ದರು. ಮನೆ ದೇವರಾದ ಅನ್ನಪೂರ್ಣೇಶ್ವರೀ, ಸ್ಥಳದಲ್ಲಿರುವ ನಾಗಬನ, ಮಂದಾರತಾಯಿ ಎಂಬ ಶಕ್ತಿದೇವತೆ, ಕಲ್ಲರ್ಟಿ, ಪಂಜುರ್ಲಿ , ಗುಳಿಗ ದೈವ ದೇವರುಗಳ ಸಾನ್ನಿಧ್ಯವಿದ್ದು ಕಾಲ ಕಾಲಕ್ಕೆ ಸರಿಯಾಗಿ ಸುತ್ತುಮುತ್ತಲ ನೂರಕ್ಕೂ ಹೆಚ್ಚು ಕುಟುಂಬಗಳು ಸೇರಿ ಶ್ರದ್ಧಾ ಭಕ್ತಿಯೊಂದಿಗೆ ನವರಾತ್ರಿ, ನಾಗರ ಪಂಚಮಿ, ತುಳಸಿಪೂಜೆ,ದೈವಗಳ ಮಾಸಿಕ ಪರ್ವ ಹೀಗೆ ಎಲ್ಲಾ ಆಚರಣೆಗಳನ್ನು ಶಾಸ್ತ್ರೋಕ್ತವಾಗಿ ಮಂದಾರ ಮನೆಯ ಹಿರಿಯರು ಮುಂಚೂಣಿಯಲ್ಲಿದ್ದು ನಡೆಸಿಕೊಂಡು ಬರುತ್ತಿದ್ದರು. ಇದೀಗ ತ್ಯಾಜ್ಯದ ರಾಶಿ ಈ ಎಲ್ಲಾ ಧಾರ್ಮಿಕ ಭಾವನೆಗಳನ್ನು ಆಪೋಷಣಗೈದಿದೆ. ಇದು ದೊಡ್ಡ ದುರಂತವೇ ಸರಿ ಎಂದು ಶ್ರೀಗಳು ಅಭಿಪ್ರಾಯಿಸಿದರು.
ತುಳು ಭಾಷೆಯ ಲಿಖಿತ ಪರಂಪರೆಯ ಮೊದಲ ರಾಮಾಯಣ ಕೃತಿ, ತುಳುವಿಗೆ ಆಕರ ಗ್ರಂಥ ಎಂದೇ ಪರಿಗಣಿಸಲ್ಪಟ್ಟ ಮಂದಾರ ರಾಮಾಯಣದ ಕರ್ತೃ ದಿವಂಗತ ಮಂದಾರ ಕೇಶವ ಭಟ್ಟರಾಗಿದ್ದರು. ತುಳು ವಾಲ್ಮೀಕಿ ಎಂದೇ ಹೆಸರಾಗಿದ್ದ ಕೇಶವ ಭಟ್ಟರು, ತಾವೇ ರಚಿಸಿದ ಮಂದಾರ ರಾಮಾಯಣವನ್ನು ಕನ್ನಡಕ್ಕೂ ತರ್ಜುಮೆಗೊಳಿಸಿದ್ದು ಅದೂ ಜನ ಮನ್ನಣೆ ಗಳಿಸಿತ್ತು. ಮಂದಾರರು ಪ್ರಾಧ್ಯಾಪಕರಾಗಿ ತುಳು ಹಾಗೂ ಕನ್ನಡದಲ್ಲಿ ಹತ್ತು ಹಲವು ಕೃತಿಗಳನ್ನು ಬರೆದು ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದರು. ಯಕ್ಷಗಾನ ಅರ್ಥದಾರಿಯಾಗಿ , ಪ್ರಸಂಗ ಕರ್ತರಾಗಿ, ಭಾಗವತರಾಗಿಯೂ ಮಂದಾರರು ತಮ್ಮನ್ನು ತೊಡಗಿಸಿಕೊಂಡಿದ್ದರು. ತುಳು ಭಾಷೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ತುಳುನಾಡಿಗೆ, ತುಳುವರಿಗೆ ತೋರಿಸಿಕೊಟ್ಟ ಹಿರಿಯ ಚೇತನ ಮಂದಾರರು. ಇವರ ವ್ಯಾಕರಣ, ಛಂದಸ್ಸು ಸೇರಿದಂತೆ ಸೃಜನಶೀಲ ಬರವಣಿಗೆ ಮತ್ತು ಶಾಸ್ತ್ರ ಸಾಹಿತ್ಯದಲ್ಲಿ ಅಪಾರ ಶ್ರದ್ಧೆ ತೋರಿದ ನಾಡು ಕಂಡ ಮೇರು ವ್ಯಕ್ತಿ ಮಂದಾರರಾಗಿದ್ದರು.
ಸ್ಥಳೀಯ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಸರಕಾರ ದೊಡ್ಡ ಮನಸ್ಸು ಮಾಡಿ ಕವಿಮನೆಯ ಪುನರ್‌ ನಿರ್ಮಾಣ ಕಾರ್ಯ ಮಾಡುವಂತಾಗಬೇಕಾಗಿದೆ. ಕನ್ನಡ ಹಾಗೂ ತುಳು ಸಾಹಿತ್ಯಾಸಕ್ತ ಬಂಧುಗಳು ಈ ಕೈಂಕರ್ಯದಲ್ಲಿ ಕೈಜೋಡಿಸಬೇಕಾಗಿದೆ ಎಂದು ಶ್ರೀಗಳು ಕರೆನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ರು ದಿನೇಶ್ ಕುಮಾರ್, ಬಸದಿ ಮುಕ್ತೇಸರ
ಇತಿಹಾಸತಜ್ಞ ಪುಂಡಿಕಾಯಿ ಗಣಪತಿ ಭಟ್, ಡಿಜಿಟಲ್ ವರ್ಲ್ಡ್ ಅಧ್ಯಕ್ಷ ರಾಜೇಶ್ ಆಳ್ವ,ಮೂಡುಬಿದಿರೆ ತುಳು ಸಂಘಟನೆ ಯ ಅಧ್ಯಕ್ಷ ಧನಕೀರ್ತಿ ಬಲಿಪ, ಭಾಗವತ ರಾದ ಶಿವಶಂಕರ ಬಲಿಪ, ಕೆ. ಪಿ ಜಗದೀಶ್ ಅಧಿಕಾರಿ, ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ, ಮಂದಾರ ಕೇಶವ ಭಟ್ರ ಮೊಮ್ಮಗ ಪ್ರಮೋದ್ ಸಪ್ರೆ ಉಪಸ್ಥಿತರಿದ್ದರು.

YOGA AT RAMARANI RESERCH CENTRE MOODBIDRI JUNE21,2020

 the ancient India .The word has many meanings, and the word is from the Sanskrit root "yuz," meaning "to control,", "unite," or "unite." Is the product. Its variants are "merger," "consolidation," "union," "combination," and "pretext / instrument." Outside of India, the term yoga is generally considered a form of Hatha yoga and its asanas (postures) or exercise. It is said that those who practice yoga or follow yoga doctrine are called Yogi or Yogini.
Shri was a specialist in the Vajrasana, Tadasana, Vrksasana (tree pose), Triangasana, Uttarkasana, Dhanurasana, Bhujangasana, Sethu-Bandasana, Sarvangasana, Dandasana, Shavasana, and Yogasanas. Nemiraj participated
Subject: international yoga day 21-6-2020 swasthisri bhattarak charukeerthi swamiji moodbidri
ಪತ್ರಿಕಾ ವರದಿ

ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು
ಮೂಡುಬಿದಿರೆ ಜೈನಮಠದ ಜಗದ್ಗುರು ಡಾ || ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಠದ ರಮಾರಾಣಿ ಶೋಧ ಸಂಸ್ಥಾನದ ಸಭಾಂಗಣ ದಲ್ಲಿ 21-06-2020 ಯೋಗ ದಿನಚರಣೆ ನಡೆಯಿತು
ಈ ಬಾರಿ ಕೋವಿಡ್ 19 ಪ್ರಯುಕ್ತ ಸಾರ್ವಜನಿಕ ರಿಗೆ ಭಾಗವಹಿಸುವ ಅವಕಾಶ ಇರಲಿಲ್ಲ ಶ್ರೀ ಮಠ ದ ಶಿಬಂದಿ ಮಾತ್ರ ಭಾಗವಹಿಸಿ ದ್ದರು
ಈ ಸಂಧರ್ಭ ಶ್ರೀ ಗಳವರು
.ಯೋಗ ವು ಅನೇಕ ಅರ್ಥಗಳನ್ನು ಹೊಂದಿದೆ, ಮತ್ತು ಆ ಪದವು "ನಿಯಂತ್ರಿಸುವ,", "ಐಕ್ಯವಾಗು" ಅಥವಾ "ಒಗ್ಗಟ್ಟಾಗು" ಎಂಬರ್ಥಗಳ ಸಂಸ್ಕೃತ ಮೂಲ "ಯುಜ್‌,"ನಿಂದ ವ್ಯತ್ಪನ್ನವಾಗಿದೆ. ಇದರ ರೂಪಾಂತರಗಳೆಂದರೆ "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಮತ್ತು "ನಿಮಿತ್ತ/ಉಪಕರಣ." ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು (ಭಂಗಿಗಳು) ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.
ಇಂದು ಮೂಡುಬಿದಿರೆ ಶ್ರೀ ಗಳು ಪ್ರಾತಃ ಕಾಲ
ವಜ್ರಾಸನ
ತಾಡಾಸನ, ವೃಕ್ಷಾಸನ (ವೃಕ್ಷದ ಭಂಗಿ), ತ್ರಿಕೋನಾಸನ,ಉತ್ಕಟಾಸನ,
ಧನುರಾಸನ, ಭುಜಂಗಾಸನ,ಸೇತು-ಬಂಧಾಸನ,
ಸರ್ವಾಂಗಾಸನ,ದಂಡಾಸನ, ಶವಾಸನ
ಹಾಗೂ ಯೋಗಾಸನ ಗಳಲ್ಲೇ ವಿಶಿಷ್ಟ ಆಸನ ವಾದ ಶೀರ್ಷಾಸನ ವನ್ನು ಮಾಡಿ ದರು ಹಾಗೂ ಯೋಗಾಸನ
,ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಗತಿ ಗೆ ಕಾರಣ
ಎಂದು ನುಡಿ ದರು
ದೈಹಿಕಸನ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ
ಮಾನಸಿಕ ಮತ್ತು ದೈಹಿಕ ಅರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು.ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗವು ಭಾರತೀಯ ಮೂಲದ, ಶ್ರಮಣ ವೈದಿಕ ಆದಿ ದ್ರಾವಿಡ ರ ಸಹಸ್ರರಾರು ವರ್ಷ ಹಳಯದಾದ, ವಿಧ್ಯೆ ಯೋಗ
ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ.ಕ್ರಿ.ಪೂ ಪೂರ್ವ ದಲ್ಲೆ ಸಹಸ್ರಾರು ವರ್ಷ ಹಿಂದೆ ಭಗವಾನ್ ಆದಿನಾಥ ರು ಎಲ್ಲಾ 24 ತೀರ್ಥಂಕರ ರು ಪದ್ಮಾಸನ ಖಡ್ಗಸನ ಗಳ ಮೂಲಕ ಯೋಗ ಸಾಧನೆ ಯಿಂದ ಲೆ ತಪಸ್ಸನ್ನು ಆಚರಿಸಿ ಮುಕ್ತಿ ಹೊಂದಿದ್ದರು ಅನಂತರ ಮುನಿ ಗಳು, ತಪಸ್ವಿ ಗಳು ಸಹಸ್ರಾರು ಋಷಿ ಗಳು ಹಾಗೂ ಕ್ರಿ. ಫೋ 3ನೇ ಶತಮಾನದ ಯೋಗ ಗುರು ಪತಂಜಲಿ ಋಷಿಯ ಚಿಂತನೆಯ ಫಲವಾದ ಅಷ್ಟಾ oಗ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಸಾಧಕ ರ ಸಾಧನ ಮಾರ್ಗವಾಗಿ ಬೆಳೆದು ಬಂದಿದೆ.
ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ.ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಒತ್ತಡ ಹಾಗೂ ಬಹು ಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಬಹುದಾಗಿದೆ
ಎಂದು ಮೂಡುಬಿದಿರೆ ಶ್ರೀ ಗಳು ತಿಳಿಸಿ
ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ. ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಎಂದು ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನುಡಿ ದರು
ಈ ದಿನ ಸೂರ್ಯ ಗ್ರಹಣ ನಿಮಿತ್ತ ಬೆಳಿಗ್ಗೆ ಬೇಗನೆ 6.00ರಿಂದ 6.15 ರ ವರೆಗೆ ಶ್ರೀ ಗಳವರು ಶ್ರೀ ಮಠ ದ ರಮಾ ರಾಣಿ ಶೋಧ ಸಂಸ್ಥಾನ ದಲ್ಲಿ ಯೋಗ ಕಾರ್ಯಕ್ರಮ ನಡೆಸಿದರು
ಶ್ರೀ ಮಠ ದ ಶಿಬಂದಿ ವರ್ಗ ದವರಾದ ಶ್ರೀ ಸುಧಾಕರ್, ರತ್ನಕುಮಾರ್, ನೇಮಿರಾಜ್ ಉಪಸ್ಥಿತರಿದ್ದರು



YOGA JOURNEY BY H.H DR CHARUKEERTHI P SWAMIJI MOODBIDRI


Yoga Journey
  20-0602020
Written by DR SWASTHI SRI CHARUKEERTHI BHATTARAK PANDITACHARYAVARYA MAHA SWAMIJI SRI JAINMATH MOODBIDRI
yoga is life  yoga teach us how live this life ideal healthy with natureAccording to Tattvarthasutra, 2nd century CE Jain text, yoga is the sum of all the activities of mind, speech and body.6 Umasvati calls yoga the cause of asrava or karmic influx170 as well as one of the essentials—samyak caritra—in the path to liberation.170 In his Niyamasara, Acarya Kundakunda, describes yoga bhakti—devotion to the path to libe
  yoga exercises recharge the body with cosmic energy and facilitates

Yama (The five abstentions): Ahimsa (Non-violence, non-harming other living beings), Satya (truthfulness, non-falsehood), Asteya (non-stealing), Brahmacharya (celibacy, fidelity to one's partner), and Aparigraha (non-avarice, non-possessiveness).
Niyama (The five observances): Śauca (purity, clearness of mind, speech and body),Santosha (contentment, acceptance of others and of one's circumstances), Tapas (persistent meditation, perseverance, austerity), Svādhyāya (study of self, self-reflection, study of Vedas),and Ishvara-Pranidhana (contemplation of God/Supreme Being/True Self).
Asana: Literally means seat, and in Patanjali's Sutras refers to the seated position used for meditation.
Pranayama (Breath exercises): Prāna, breath, āyāma, to stretch, extend, restrain, stop.
Pratyahara (Abstraction): Withdrawal of the sense organs from external objects.
Dharana (Concentration): Fixing the attention on a single object.
Dhyana (Meditation): Intense contemplation of the nature of the object of meditation.
Samadhi (Liberation): merging consciousness with the object of meditation.

Attainment of perfect equilibrium and harmony
Promotes self- healing.
Removes negative blocks from the mind and toxins from the body
Enhances personal power
Yoga to live with greater awareness
Helps in attention, focus and concentration, especially important for children
Reduces stress and tension in the physical body by activating the parasympathetic nervous system
Yoga for better global relationships 
jai Bharath